ಗಾಯಕಿ ಶ್ವೇತಾ ದೇವನಹಳ್ಳಿ ವಿವಾಹ

ಕನ್ನಡದ ಯುವ ಗಾಯಕಿ ಶ್ವೇತಾ ದೇವನಹಳ್ಳಿ ವೈವಾಹಿಕ ಜೀವನಕ್ಕೆ ಪ್ರವೇಶಿಸಿದ್ದಾರೆ.

ಕನ್ನಡದ ಪ್ರತಿಭಾವಂತ ಗಾಯಕಿ ಶ್ವೇತಾ ಮತ್ತು ಗುಜರಾತ್ ನ ಚೆಲುವ ಜೆನಿಲ್ ಪರ್ಮಾರ್ ವಿವಾಹ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಜಲರಾಮ್ ಸಭಾಭವನದಲ್ಲಿ ಇಂದು ಶುಕ್ರವಾರ ನೆರವೇರಿತು.

2016ರಲ್ಲಿ ವಾಯ್ಸ್ ಇಂಡಿಯಾ ಸೀಸನ್ 2 ಸ್ಪರ್ಧೆಯಲ್ಲಿ ಮುಂಬೈಗೆ ಹೋಗಿದ್ದಾಗ ಭೇಟಿಯಾಗಿದ್ದರು. ಅಲ್ಲಿ ಕಂಟೆಸ್ಟೆಂಟ್ ಮ್ಯಾನೇಜರ್ ಆಗಿದ್ದರು. ಸ್ನೇಹವಾಗಿ ಅದು ಪ್ರೀತಿಯಾಗಿ ಇಂದು ಮದುವೆ ಹಂತ ತಲುಪಿದೆ. ಪ್ರೇಮಿಗಳಿಗೆ ಎರಡು ಕುಟುಂಬಗಳು ಬೆಂಬಲವಾಗಿ ನಿಂತಿವೆ. ಇದರಲ್ಲಿ ತಮ್ಮ ಅಣ್ಣ ಆದರ್ಶ್ ಮತ್ತು ಅತ್ತಿಗೆ ಪಾತ್ರ ಪ್ರಮುಖ ಎಂದು ಶ್ವೇತಾ ಸಂತಸ ವ್ಯಕ್ತಪಡಿಸಿದ್ದಾರೆ.

ಮದುಮಗ ಜೆನಿಲ್ ಪರ್ಮಾರ್ ಶ್ವೇತ ಜೊತೆಗೆ ಕರ್ನಾಟಕದ ಜನತೆಯ ಆತ್ಮೀಯತೆಯನ್ನು ಇಷ್ಟಪಟ್ಟಿರುವುದಾಗಿ ಹೇಳುತ್ತಾರೆ. ಸಮಾರಂಭದಲ್ಲಿ ಗಾಯಕ ಬದ್ರಿ ಪ್ರಸಾದ್, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ, ಗೀತ ರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಸಿನಿಮಾ ಸಂಗೀತ ಲೋಕದ ಜನಪ್ರಿಯರು ಪಾಲ್ಗೊಂಡಿದ್ದರು.

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಟ್ಟ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಕಾರ್ಯಕ್ರಮದ ಸ್ಪರ್ಧಿಯಾಗಿ ಗಮನ ಸೆಳೆದ ಶ್ವೇತಾ ಇದುವರೆಗೆ ಸಾಕಷ್ಟು ರಿಯಾಲಿಟಿ ಶೋಗಳ ಸ್ಫರ್ಧಿಯಾಗಿ, ವಿಜೇತೆಯಾಗಿ, ಮೆಂಟರ್ ಆಗಿ ಗುರುತಿಸಿಕೊಂಡವರು. ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ‘ದಯವಿಟ್ಟು ಗಮನಿಸಿ’ ಚಿತ್ರದ ಮರೆತು ಹೋದೆನು ಗೀತೆಯ ಆಲಾಪನೆಯೊಂದರಿಂದಲೇ ಜನಪ್ರಿಯರಾದವರು ಶ್ವೇತಾ ದೇವನಹಳ್ಳಿ. ಆನ್ಲೈನ್ ಸಂಗೀತ ಶಿಕ್ಷಣದ ಮೂಲಕ ಅಪಾರ ಶಿಷ್ಯವರ್ಗ ಮತ್ತು ಅಭಿಮಾನಿಗಳನ್ನು ಹೊಂದಿರುವ ಶ್ವೇತಾ ದಾಂಪತ್ಯ ಬದುಕಿಗೆ ಸಿನಿಕನ್ನಡದ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: