ಕನ್ನಡದ ಯುವ ನಟ ಧನುಷ್ ನಿಧನ

ಕನ್ನಡದ ಯುವ ನಟರಲ್ಲಿ ಭರವಸೆ ಮೂಡಿಸಿದ್ದ ಧನುಷ್ ಯಾನೇ ಮುತ್ತುರಾಜ್ ನಿಧನರಾಗಿದ್ದಾರೆ. ದಿಢೀರ್ ಅನಾರೋಗ್ಯದಿಂದ ಇವರ ಸಾವಾಗಿದೆ.

ಯುವನಟ ಧನುಷ್ ನಟ ಮಾತ್ರವಲ್ಲ, ಕತೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದು ನಿರ್ದೇಶಿಸಿ ಬಹುಮುಖ ಪ್ರತಿಭೆ ಎನಿಸಿದ್ದರು. ಪ್ಯಾರ್ ಕ ಗೋಲ್ ಗುಂಬಜ್ ಸಿನಿಮಾ ಅದಕ್ಕೊಂದು ಉದಾಹರಣೆಯಾಗಿತ್ತು.

ಲಡಾಖ್ ನಲ್ಲಿ ಅನಾರೋಗ್ಯ

ಧನುಷ್ ಕಳೆದ ವಾರ ಸಿನಿಮಾ ಚಿತ್ರೀಕರಣಕ್ಕಾಗಿ ಲಡಾಖ್ ಗೆ ಹೋಗಿದ್ದರು. ಆದರೆ ಅಲ್ಲಿಯ ವಾತಾವಾರಣ ಹೊಂದಿಕೊಳ್ಳದ ಕಾರಣ ಅನಾರೋಗ್ಯ ಪೀಡಿತರಾಗಿದ್ದರು. ತಕ್ಷಣ ಬೆಂಗಳೂರಿಗೆ ಬಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಜನವರಿ 18ರಂದು ಬುಧವಾರ ರಾತ್ರಿ 10.45ಕ್ಕೆ ಸಾವಾಗಿದೆ.

ಶಿವಣ್ಣನ ಜೊತೆಗೂ ನಟಿಸಿದ್ದ ನಟ

ಧನುಷ್ ‘ಪ್ಯಾರ್ ಕಾ ಗೋಲ್ಗುಂಬಜ್’, ‘ಕೊಟ್ಳಲ್ಲಪ್ಪೋ ಕೈ’, ‘ಸಂಪಿಗೆ ಹಳ್ಳಿ’ ಚಿತ್ರಗಳಲ್ಲಿ ನಾಯಕರಾಗಿದ್ದರು. ಶಿವರಾಜ್ ಕುಮಾರ್ ನಟನೆಯ ‘ಲೀಡರ್’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸಿದ್ದರು.

ಇವರ ಅಂತ್ಯ ಸಂಸ್ಕಾರವನ್ನು ಇಂದು ಧನುಷ್ ಊರಾದ ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ನೆರವೇರಿಸಲಾಗುವುದು.

Recommended For You

Leave a Reply

error: Content is protected !!
%d bloggers like this: