ಲಾಕ್ಡೌನ್ ಬಗ್ಗೆ ಸಿ ಎಂ ಗೆ ಉಪ್ಪಿ ಮನವಿ

ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯದ ಲಾಕ್ಡೌನ್ ಪರಿಸ್ಥಿತಿಯ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಾಮಾಜಿಕ ಜಾಲತಾಣದ ಮೂಲಕ ಒಂದು ಮನವಿ ನೀಡುವುದಾಗಿ ಸೂಚಿಸಿರುವ ಉಪೇಂದ್ರ ಉಲ್ಲೇಖಿಸಿರುವ ವಿಚಾರಗಳು ನಿಜಕ್ಕೂ ಯೋಚಿಸಬೇಕಾದಂಥ ಸಂಗತಿಗಳಾಗಿವೆ .

ಮಾನ್ಯ ಮುಖ್ಯಮಂತ್ರಿಗಳಲ್ಲಿ ಒಂದು ವಿನಂತಿ….

ದಯವಿಟ್ಟು ಎರಡರಲ್ಲಿ ಯಾವುದಾದರೂ ಒಂದು ಮಾಡಿ.

  1. ಶೇಕಡ ನೂರು ಲಾಕ್ಡೌನ್… ಸಂಪೂರ್ಣ ಸರ್ಕಾರೀ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ. ( ಹಾಲು, ತರಕಾರೀ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರೇ ಸೇರುತ್ತಾರೆ ). ( ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ ).
  2. ಜನರಿಗೇ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ಡೌನ್ ತೆರೆಯಿರಿ. ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ( ಸೋಶಿಯಲ್ ಡಿಸ್ಟೆನ್ಸಿಂಗ್ ) ಅಂತರ ಕಾಯ್ದುಕೊಂಡು, ಮಾಸ್ಕ್ ದರಿಸಿ ಅವರವರ ವ್ಯವಹಾರ ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರೂ ( ಹೀಗೆ ನಾಯಕರು ಮಾಡಿಬಿಟ್ಟಿದ್ದಾರೆ ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ ).

ಲಾಕ್ಡೌನ್ ಮಾಡಿಕೂಡ ಜನರನ್ನು ಹಾಲು ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ ?

ಇಷ್ಟೆಲ್ಲಾ ಲಾಕ್ಡೌನ್ ಮಾಡೀನೇ ನಮ್ ದಡ್ಜ ಜನರು ಹೀಗೆ ಇನ್ನು ಲಾಕ್ಡೌನ್ ತೆಗದ್ರೆ ರೋಡ್ ರೋಡಲ್ಲಿ ಹೆಣಗಳು ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ ) ಒಂದು ಕಿವಿಮಾತು. ಹೀಗೇ ಲಾಕ್ಡೌನ್ ಮುಂದುವರಿಸಿದರೂ ಅದೇ ಪರೀಸ್ಥಿತಿ ಬರಬಹುದು ಯೋಚನೆ ಮಾಡಿ.

ಮಲಗಿದ್ರೆ – ಸಾವು
ಕೂತಿದ್ರೆ – ರೋಗ
ನಡೀತಿದ್ರೆ – ಜೀವನ.

Recommended For You

Leave a Reply

error: Content is protected !!