ಅನುರಾಗದ ಸಂಭ್ರಮ..!

ಅನುರಾಗ ಸಂಗಮ ಸಿನಿಮಾ ನೋಡಿದವರಿಗೆ ಆ ಚಿತ್ರ ತೀರ ಇತ್ತೀಚೆಗೆ ಬಂದಂತೆ ಅನಿಸಬಹುದು. ಯಾಕೆಂದರೆ ಅದರಲ್ಲಿ ತುಂಬಿರುವ ಭಾವಗಳು ಅಷ್ಟು ಹಸಿರು. ಆದರೆ ಚಿತ್ರ ತೆರೆಕಂಡು ಇಂದಿಗೆ 25 ವರ್ಷಗಳು! ಆ ಕುರಿತಾದ ವಿಶೇಷ ಲೇಖನ ಇದು.

ಚಿತ್ರದಲ್ಲಿ ರಮೇಶ್ ಅರವಿಂದ್ ಗಿಂತ ಪ್ರಾಧಾನ್ಯತೆ ಕುಮಾರ್ ಗೋವಿಂದ್ ಅವರಿಗೆ. ಆದರೆ ಚಿತ್ರ ನೋಡಿದವರು ರಮೇಶ್ ಅರವಿಂದ್ ನಟನೆ ಮರೆಯುವುದು ಕಷ್ಟ. ಯಾಕೆಂದರೆ ಅವರ ಪಾತ್ರ ಮತ್ತು ನಟನೆ ಆ ಮಟ್ಟದಲ್ಲಿತ್ತು.

ಚಾರ್ಲಿ ಚಾಪ್ಲಿನ್ ಅವರ ಸಿಟಿಲೈಟ್ಸ್ ಚಿತ್ರವನ್ನು ಸ್ಫೂರ್ತಿಯಾಗಿಸಿಕೊಂಡು ಮಾಡಿರುವ ವಿಭಿನ್ನವಾದ ಸಿನಿಮಾ ‘ಅನುರಾಗ ಸಂಗಮ’. ಅದರ ಬಳಿಕ‌ ಈ ಸಿನಿಮಾ ತಮಿಳು, ತೆಲುಗು ಭಾಷೆಗೂ ರಿಮೇಕ್ ಆಯಿತು! ಯಾಕೆಂದರೆ ಚಿತ್ರ ಕನ್ನಡದಲ್ಲಿ 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ದಾಖಲಿಸಿತ್ತು.

ನಿಜ’ರಾಗ’ದ ಸಂಗಮ!

ಅನುರಾಗ ಸಂಗಮವನ್ನು ಇಂದು ನಾವು ಅದರ ಹಾಡುಗಳ ಮೂಲಕ‌ ನಿತ್ಯವೂ ನೆನಪಿಸುತ್ತೇವೆ. ಉಮಾಕಾಂತ್ ನಿರ್ದೇಶನದ ಈ ಸಿನಿಮಾದಲ್ಲಿ ಅಂಥ ಹಾಡುಗಳನ್ನು ನೀಡಿದ ಕೀರ್ತಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರಿಗೆ ಸಲ್ಲುತ್ತದೆ. “ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ ಸದಾ..” ಎನ್ನುವ ಗೀತೆ ಹಾಡಿನ ಜೊತೆಯಲ್ಲೇ ಹೊಸ ಗಾಯಕನನ್ನೂ ನೀಡಿತು. ರಮೇಶ್ಚಂದ್ರ ಅವರ ಕಂಠದಿಂದ ಹೊಮ್ಮಿದ ಆ ಗೀತೆಗೆ ರಾಜ್ಯ ಪ್ರಶಸ್ತಿಯೂ‌ ಲಭಿಸಿತು.

ಚಿತ್ರದಲ್ಲಿ ಕುಮಾರ್ ಗೋವಿಂದ್ ಮತ್ತು ಸುಧಾರಾಣಿ‌ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಬಿ ಸರೋಜಾ ದೇವಿಯರು ಕೂಡ ಒಂದು ಪ್ರಧಾನ ಪಾತ್ರವನ್ನು ನಿಭಾಯಿಸಿದ್ದರು. ಎಸ್.ಕೆ ಫಿಲಮ್ಸ್ ಲಾಂಛನದಲ್ಲಿ ಡಿ. ಗೋವಿಂದಪ್ಪ ಅವರು ಚಿತ್ರವನ್ನು ನಿರ್ಮಿಸಿದ್ದರು.

Recommended For You

Leave a Reply

error: Content is protected !!