ನಿರ್ಮಾಪಕ‌ ಡಿ.ಎಸ್ ಮಂಜುನಾಥ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಯುವ ನಿರ್ಮಾಪಕ, ನಟ ಡಿ.ಎಸ್ ಮಂಜುನಾಥ್ ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಕೊರೊನಾ ಕಾರಣ ಎಂದು ತಿಳಿದು ಬಂದಿದೆ.

ಕಳೆದ ವರ್ಷ ತೆರೆಕಂಡ ಚಿತ್ರಗಳಲ್ಲಿ ‌ಸುದ್ದಿ ಮಾಡಿದ್ದ ತಬಲಾ ನಾಣಿಯವರ ನಟನೆಯ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ಮಾಪಕ ಇವರು. ಅದಕ್ಕೂ ಮೊದಲು ‘ಸಂಯುಕ್ತ-2’ ಚಿತ್ರವನ್ನು ನಿರ್ಮಿಸಿದ್ದ ಇವರು ಅದರಲ್ಲಿ ಒಂದು ಪ್ರಮುಖ ಪಾತ್ರವನ್ನು ಕೂಡ ನಿಭಾಯಿಸಿದ್ದರು.

ನಿರ್ಮಾಣದ ಜೊತೆಗೆ ಅರ್ಜುನ್ ಮಂಜುನಾಥ್ ಹೆಸರಲ್ಲಿ ಅವರು ನಾಯಕರಾಗಿ‌ ನಟಿಸಿರುವ ಚಿತ್ರ ‘0% ಲವ್’ ಇನ್ನಷ್ಟೇ ತೆರೆಕಾಣಬೇಕಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಮಂಜುನಾಥ್ ಜಿಮ್ ಗೆ ಹೋಗಿ ದೈಹಿಕವಾಗಿ ಕಟ್ಟುಮಸ್ತು ದೇಹ ಹೊಂದಿದ್ದರು. ಆದರೆ ಕೊರೊನಾದಿಂದ ಆಸ್ಪತ್ರೆಗೆ ದಾಖಲಾದ ಇವರು ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಕೊರೊನ ಎಂಥವರಿಗೂ ಮರಣ ಶಾಸನ ಬರೆಯುತ್ತಿರುವುದು ಭಯಾನಕ ವಾತಾವರಣ ಮೂಡಿಸಿದೆ. ಒಟ್ಟಿನಲ್ಲಿ ಎಚ್ಚರಿಕೆ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

Recommended For You

Leave a Reply

error: Content is protected !!
%d bloggers like this: