‘ಜೋಕಾಲಿ’ ಖ್ಯಾತಿಯ ನಟಿ ಪವಿತ್ರಾ ಜಯರಾಮ್ ಸಾವು

ಕನ್ನಡ ಕಿರುತೆರೆಯ ಮೂಲಕ ಹೆಸರು ಮಾಡಿದ ಮಂಡ್ಯದ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಶನಿವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಪವಿತ್ರಾ ಜಯರಾಮ್ ಎರಡು ತಿಂಗಳ ಹಿಂದೆಯಷ್ಟೇ ತಂದೆ ಜಯರಾಮ್ ಅವರನ್ನು ಕಳೆದುಕೊಂಡಿದ್ದರು. ಇದೀಗ ಸ್ನೇಹಿತ ಚಂದು ಜೊತೆಗೆ ಪ್ರಯಾಣಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಈ ಸಾವು ಸಂಭವಿಸಿದೆ ಎನ್ನಲಾಗಿದೆ. ಚಂದು ಕೂಡ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ತ್ರಿನಯನಿ ಧಾರಾವಾಹಿಯ ತಿಲೋತ್ತಮ ಪಾತ್ರ ಪವಿತ್ರಾ ಜಯರಾಮ್​ಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ತ್ರಿನಯನಿ ಕನ್ನಡಕ್ಕೂ ಡಬ್ ಆಗುವ ಮೂಲಕ ಕನ್ನಡದಲ್ಲೂ ಅಭಿಮಾನಿಗಳನ್ನು ಪಡೆದಿದ್ದರು.

ತಾವು ಸರಿಯಾದ ವಿದ್ಯಾಭ್ಯಾಸ ಪಡೆಯದ ಕಾರಣ, ತಮಗೆ ಅವಕಾಶಗಳು ಸರಿಯಾದ ಸಮಯದಲ್ಲಿ ಸಿಗಲಿಲ್ಲ ಎಂದು ಪವಿತ್ರಾ ಕಷ್ಟ ಹೇಳಿಕೊಳ್ಳುತ್ತಿದ್ದರು. ಮಂಡ್ಯದ ಲ್ಲಿ ಹುಟ್ಟಿದ ಪವಿತ್ರಾ ಅವಕಾಶಕ್ಕಾಗಿ ಬೆಂಗಳೂರು ಸೇರಿಕೊಂಡಿದ್ದರು. ಆದರೆ ಆರಂಭದಲ್ಲಿ ಮನೆಗೆಲಸದಿಂದ ಹಿಡಿದು ಸೇಲ್ಸ್ ಗರ್ಲ್ ಆಗಿಯೂ, ಲೈಬ್ರರಿಯಲ್ಲೂ ಕೆಲಸ ಮಾಡಿದ ಅನುಭವ ಈಕೆಯದ್ದಾಗಿತ್ತು. ಸಿರಿಗಂಧ ಶ್ರೀನಿವಾಸ ಮೂರ್ತಿ ಮೂಲಕ ಕನ್ನಡದ ಡಾಕ್ಯುಮೆಂಟರಿಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಬಳಿಕ ಕನ್ನಡದ ಜನಪ್ರಿಯ ಧಾರಾವಾಹಿ ಜೋಕಾಲಿ ಯಲ್ಲಿ ನಾಯಕನ ಸಹೋದರಿಯ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು. ರೋಬೋ ಫ್ಯಾಮಿಲಿ, ರಾಧಾರಮಣದಲ್ಲಿಯೂ ನಟಿಸಿದ್ದರು. ಬಳಿಕ ತೆಲುಗು ಭಾಷೆಯಲ್ಲಿ ಉತ್ತಮ ಅವಕಾಶ ಪಡೆದು ಆಂಧ್ರಪ್ರದೇಶ ಸೇರಿಕೊಂಡರು. ನಿನ್ನೇ ಪೆಳ್ಳಾಡತಾ ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದರು. ತೆಲುಗು ಸಿನಿಮಾಗಳಲ್ಲೂ ಪೋಷಕ ನಟಿಯ ಪಾತ್ರ ಮಾಡಿದರು. ಇತ್ತೀಚೆಗಷ್ಟೇ ರಮ್ಯಾ ಕೃಷ್ಣ ಜತೆಗೂ ನಟಿಸಿದ ನೆನಪಿಗೆ ಫೊಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಮದುವೆಯಾಗಿ ಪುತ್ರನನ್ನು ಪಡೆದ ಬಳಿಕ ವಿಚ್ಚೇದನಗೊಂಡಿದ್ದರು. ಪವಿತ್ರಾ ಜಯರಾಮ್ ದಾಂಪತ್ಯ ಜೀವನದಲ್ಲಿ ಖುಷಿ ಕಂಡಿರಲಿಲ್ಲ. ಸಹ ನಟ ಚಂದು ಜತೆಗೆ ವಿವಾಹವಾಗಿದೆ ಎನ್ನಲಾಗಿತ್ತು. ಯೂಟ್ಯೂಬ್ ವಾಹಿನಿಗೂ ಪವಿತ್ರಾ ಚಂದ್ರ ಎಂದು ಹೆಸರಿಟ್ಟಿದ್ದರು. ಆದರೆ ಅಪಘಾತ ಈ ಜೋಡಿಯನ್ನು ದೂರ ಮಾಡಿದೆ. ಕಾಲೇಜು ವಿದ್ಯಾರ್ಥಿಯಾಗಿರುವ ಪುತ್ರನನ್ನು ಚಿತ್ರರಂಗಕ್ಕೆ ತರುವುದು ಪವಿತ್ರಾ ಕನಸಾಗಿತ್ತು. ಆದರೆ ಎಲ್ಲವನ್ನೂ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಚಂದು

Recommended For You

Leave a Reply

error: Content is protected !!